ಎಪ್ಪತ್ತರ ದಶಕದ ಅಂತ್ಯದಲ್ಲಿ ಕನ್ನಡ ಸಂಘ ಅಸ್ತಮಿಸಿದಾಗ ಪಣಜಿಯ ಕನ್ನಡಿಗರು ಅನೇಕ ವರ್ಷಗಳ ಕಾಲ ಕನ್ನಡ ಕಾರ್ಯಕ್ರಮಗಳಿಲ್ಲದೇ ಅನಾಥರಂತಿದ್ದರು. ಕನ್ನಡಿಗರ ಕನ್ನಡತನವನ್ನು ಜೀವಂತವಾಗಿಡಲು ಸಂಘಟನೆಯೊಂದು ಅತ್ಯವಶ್ಯಕ ಎಂಬುದನ್ನು ಮನಗಂಡ ಕೆಲ ಪ್ರಮುಖರು ಗೋವಾ ಕನ್ನಡ ಸಮಾಜ, ಪಣಜಿ ಎಂಬ ಹೊಸ ಸಂಘಟನೆಯೊಂದನ್ನು ಹುಟ್ಟು ಹಾಕಿದರು. ಇದು ಅಸ್ತಿತ್ವಕ್ಕೆ ಬಂದಿದ್ದು ೧೯೮೪ ರಲ್ಲಿ RAW ದಲ್ಲ್ಲಿ DYSP ಯಾಗಿದ್ದ ಶ್ರೀ.ವಿ.ಆರ್.ಕಟ್ಟಿಮನಿ ಅವರು ಇದರ ಸಂಸ್ಥಾಪಕ ಅಧ್ಯಕ್ಷರು. ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾದೀ ಅಪಾರ ಅನುಭವ ಹೊಂದಿದ್ದ ಶ್ರೀ.ವಿ.ವಿ.ಕುಲಕರ್ಣಿ ಯವರು ಇದರಲ್ಲೂ ಕಾರ್ಯದರ್ಷಿಗಳಾದರು.

ತೊಂಭತ್ತರ ದಶಕದ ಆರಂಭದ ಹೊತ್ತಿಗೆ ಶ್ರಿಯುತ ವಿ.ವಿ.ಕುಲಕರ್ಣಿಯವರು ಅಧ್ಯಕ್ಷರಾದರು. ಅದರ ನಂತರ ಚಟುವಟಿಕೆಗಳು ಇನ್ನೂ ವೇಗವನ್ನು ಪಡೆದುಕೊಂಡವು. ಕಡಲತೀರದ ಭಾರ್ಗವ ಡಾ.ಶಿವರಾಮ ಕಾರಂತರ ಸನ್ಮಾನ, ಬಿಹಾರದ ರಾಜ್ಯಪಾಲರೂ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸ್ಠಾಪಕ ಸದಸ್ಯರೂ ಆಗಿದ್ದ ಶೀ.ರಂಗರಾಜ ದಿವಾಕರ ಅವರ ಸನ್ಮಾನ, ಕನ್ನಡ ಕ್ರಿಕೆಟಿಗ ಜಾವಗಲ್ ಶ್ರೀನಾಥ ಅವರಿಗೆ ಸನ್ಮಾನ 'ಪಂಚರತ್ನ' ಗಳಂತಿದ್ದ ಐವರು ಜ್ನ್ಯಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಗೌರವ, ಕನ್ನಡ ಸಾಹಿತ್ಯ ಸಮ್ಮೇಳನ, ತೇರು ಕಾದಂವರಿಯ ಬಿಡುಗಡೆ, ರಾಮಕೃಷ್ಣ ಹೆಗಡೆಯವರಿಗೆ ಸನ್ಮಾನ ಇವು ಶ್ರೀ.ವಿ.ವಿ. ಕುಲಕರ್ಣಿಯವರ ಅಧಿಕಾರಾವಧಿಯಲ್ಲಿ ನಡೆದ ಉಲ್ಲೇಖನಾರ್ಹ ಕಾರ್ಯಕ್ರಮಗಳು.
ಕಾರ್ಯಕ್ರಮಗಳು


ಕಾರ್ಯಕ್ರಮಗಳು
- ಭಾರತ ರತ್ನ ಭೀಮಸೇನ ಜೋಶಿಯವರಿಗೆ ದಿ.೨೦/೧೨/೨೦೦೮ ರಂದು ಸಮಾಜದವತಿಯಿಮದ ಸನ್ಮಾನ ಪತ್ರವನ್ನು ಕೊಡಲಾಯಿತು. ತಮ್ಮ ಅನಾರೋಗ್ಯದ ಹೊರತಾಗಿಯೂ ನಮ್ಮನ್ನು ಅವರು ತುಂಬು ಹೃದಯದಿಂದ ಅಶಿರ್ವದಿಸಿದರು ಅದಕ್ಕಾಗಿ ನಾವು ಸದಾ ಚಿರರುಣಿಗಳು.
- ದಿ. ಫೆಬ್ರುವರಿ ೭,೨೦೦೯ ರಂದು ನಡೆಯುವ ಕನ್ನಡ ಸಂಸ್ಕೃತಿ ಸಮಾವೇಶದ ಉದ್ಘಾಟನ ಸಮಾರಂಭಕ್ಕೆ ಕನ್ನಡದ ಖ್ಯಾತ ಚಲನಚಿತ್ರ ನಟರಾದ ಮುಖ್ಯಮಂತ್ರಿ ಚಂದ್ರು ಅವರು ಆಗಮಿಸಲಿದ್ದಾರೆ, ಕಾರಣ ಎಲ್ಲ ಕನ್ನಡ ಅಭಿಮಾನಿಗಳು ಈ ಸಮಾರಂಭಕ್ಕೆ ಅನೇಕ ಸಂಖ್ಯೆಯಲ್ಲಿ ಉಪಸ್ಥಿತರಿರಲು ಕೋರಲಾಗಿದೆ.
- ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮಾವೇಶ ಗೋವಾ ಕನ್ನಡ ಸಮಾಜದ ಸಹಯೋಗದೊಂದಿಗೆ ದಿ.7 ಹಾಗೂ 8 ಫೆಬ್ರುವರಿ 2009 ರಂದು ಗೋಮಾಂತಕ ಮರಾಠಾ ಸಮಾಜ ಹಾಲ್, ಪಣಜಿಯಲ್ಲಿ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರದ ಅನೇಕ ಸ್ಥಳಗಳಿಂದ ಸುಮಾರು 40 ಹೊರನಾಡು ಕನ್ನಡ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾರಣ ಗೋವಾದ ಸಮಸ್ತ ಕನ್ನಡ ಅಭಿಮಾನಿಗಳು ಈ ಎರಡು ದಿನಗಳ ಸಾಂಸ್ಕೃತಿಕ ಸಮಾರಂಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಸವಿಯನ್ನು ಅನುಭವಿಸಬೇಕೆಂದು ಕೋರಲಾಗಿದೆ. ಎರಡು ದಿನಗಳ ಈ ಸಮಾರಂಭದಲ್ಲಿ ಉಪಹಾರದ ಹಾಗೂ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಕಾರ್ಯಕ್ರಮದ ಪಟ್ಟಿಯನ್ನು ನೋಡಲು ಕೋರಲಾಗಿದೆ ಎಂದು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೭ ೨೦೦೮ ರಂದು ಬೊಂಡಲ ಪ್ರವಾಸಿಧಾಮದಲ್ಲಿ ತೆಗೆದ ಚಿತ್ರಗಳ ನೋಟ


ದಯವಿಟ್ಟು ನವೀಕರಿಸಿ | Kindly renew membership |
ವಾರ್ಷಿಕ ಸದಸ್ಯತ್ವ | :-Rs. 200/- | Yearly subscription |
ಅಜೀವ ಸದಸ್ಯತ್ವ | :- Rs. 2,000/- | Life time membership |
ಪೋಷಕರು | :- Rs. 5,000/- | Patrons |
ಪ್ರಕಟಣೆ